ದೇವರಾಟ ಕಣಗಂಡೆ ಸಂಶಿಯೊಳು

ದೇವರಾಟ ಕಣಗಂಡೆ ಸಂಶಿಯೊಳು
ಹಾವ ಕಡದು ಸತ್ತಿತೋ ಹುಡುಗಾ
ಜೀವ ಹೋಗಿ ಜನ ಮೌನವಾಯಿತೋ
ಕಾವಿಲಿಟ್ಟಳೋ ಬೆಡಗಾ
ಕಾವಲಿಟ್ಟಳೋ ಮೃತ್ಯುದೇವತೀ
ತಾ ಒದಗಿಸಿ ಅದರೊಳು ದಿಡಗಾ
ಸಾವು ಬಂತು ಹನ್ನೆರಡು ವರುಷಕೆ
ಆವ ಭಾವ ಆರಿಯದ ಯಡಗಾ
ಭಾವ ಶುದ್ಧವಿದು ಬ್ರಹ್ಮ ಲಿಖಿತದಲಿ
ತಾಯಿ ತಂದಿ ಗರ್ಭದ ಹಡಗಾ
ಯಾವ ಮಾತೇನಂತ ಹೇಳಲಿ
ಮಾಯ ಸಖಿಯ ಕೈಯನ ಕಡಗಾ
ಅಟವ ನೋಡಿ ಆವ ಸಾಯಕಾಗಿ ಒಂದು ಸರ್ಪಾ
ಈ ಪಾಯ ವಡವಿ ಯಮನೂರ ಒಡಿಯನಕ್ಷೇಪಾ
ಮುಂಚೆ ಹೇಳತಿದ್ದ ಅವರಪ್ಪಾ
ಬಹು ಛಾಯ ರಾಜನೆಂಬುವಂಥ ಹೆಸರಿನ ಟೋಪಾ
ಚಿಕ್ಕ ಪ್ರಾಯದ ಕಮ೯ದ ಪಾಪಾ
ಆವುಕಾವುಗಳು ತಿಳಿಯದೆ ಲೋಕದಿ
ಈ ವಿಸ್ತರ ಈ ಪರಿ ಹೀಗಾ
ಆಯಾಸಿಲ್ಲದೆ ಬ್ಯಾನಿ ಜನರು ಕಂಡು
ಸೇವಿ ನೆಡದಿತು ಪೊಡವಿಯ ಮ್ಯಾಗ ||೧||

ವಸುಧಿಯೊಳು ಹೊಸಮಾತು ಕೌತುಕುಕಾ
ಮುಸಲ್ಮಾನ ಜನ ಮಹಿಮಕುಲಾ
ಕೊಸರಿ ಬಂದು ಕಾಳುರಗ ಹೆಚ್ಚಿತು
ಹಸುಮಗನೀತನ ಪುಣ್ಯ ಫಲಾ
ವಿಷವು ಏರಿ ಅಸುಹಾರಿದ ಹೆಣವನು
ಹಸನಮಾಡಿ ಹುಗಿದಂಥ ಸ್ಥಳಾ
ಉಸುಕುಬೈಲಿ ಎರೆಮಣ್ಣಿನ ಗೋರಿಗೆ
ಶಿವಬ್ರಹ್ಮ ರಕ್ಕಸ ಜಾಲಾ
ಅಸಲ ತುರುಕರು ಜಾತಿ ಕಮ೯ದಲಿ
ಓದಕಿಮಾಡ್ಯಾರೋ ಬಿಸಮಿಲ್ಲಾ
ಹೆಸರಾದ ಸಂಶಿ ದೊಡ್ಡಗ್ರಾಮಯೆಂಬುವದು ಗೊತ್ತಾ
ದೆಸೆಗೆಟ್ಟು ಊರೊಳ್ಯಾವತ್ತಾ
ಕುಶಲದಿ ಗೌಡ ಕುಲಕರ್ಣಿ ರೈತ ಜನ ಜತ್ತಾ
ಹಸನಾದ ಸಾವಕಾರ ಸಹಿತ
ದಶದಿಕ್ಕಿಗ್ಹತ್ತಿತೋ ಸುದ್ದಿ ನೂತನೆಂಬೂತಾ
ಶಿವ ಬಲ್ಲಾ ಅವರ ಮಸಲತ್ತಾ
ಹುಸಿಯನಾಡಲಹುದಾಗದು ಲೋಕದಿ
ಬೆಸಿಗಿ ಬ್ಯಾರೆ ಡಂಬಕ ಭೋಗಾ
ತುಸುದಿನದೊಳಗಿದು ವಡದು ಹೋಗುತದ
ಕಸಮೂಲದ ಕರ್ಮದ ಪಡಗಾ ||೨||

ಹೂಡು ಎತ್ತು ಬಂಡಿ ಈ ಕ್ಷಣಕ ಕೊಟ್ಟರೆ
ಜೋಡ ಕಂದೂರಿ ಮಾಡುವೆನೆಂದು
ಕಿವುಡ ಕುರುಡ ಕುಂಟ ಮುಂಡ ಮುಕರ‍್ಯಾ
ಬೋಡಮೂಕ ಬಾಯ್ಬೇಕೆಂದು
ಜಾಡ ಬಣಜಿಗರು ವ್ಯವಹಾರಾಗಲೆಂದು
ಕೋಡಗನ್ಹಾಂಗ ಕುಣಿಯುತ ಬಂದು
ಬಾಡ ಮಾರುವಾ ಬಾಗುವಾನರು
ನೀಡುತಿಹರು ಸಕ್ಕರಿ ಒಯ್ದು
ಹಾಡುವ ಚೌಡಕಿಯ ಜೋಗಿ ಜಂಗಮ ಫಕ್ಕೀರಾ
ಆಡುವ ಡೊಂಬ ಜಾತಿಗಾರಾ
ಪಾಡಾಗಿ ಪದಗಳ್ಹೇಳುವ ದಾಸ ದೂರ ದೂರಾ
ಕೇಡಿಗ ಕಿಳ್ಳಿಕ್ಯಾತರ ಮೋಡಿಕಾರಾ
ಪುಂಗಿ ಬಾರಿಸುವಂತ ಕೊರವರಾ
ಗಾಡೀಗ ಗೊಲ್ಲ ಹಾವಗಾರಾ
ಆಡಲೇನು ಅತಿ ಚೋದ್ಯವಾಯಿತು
ರೂಢಿ ಜನಕೆ ಈಗ ಈಗ
ಕಾಡ ಅಡವಿಯೊಳು ಸತ್ತದವಕ ಜನ
ಮಾಡಿದಲ್ಲೋ ಸಿಂಗರ ಹೀಂಗಾ ||೩||
ಇಷ್ಟು ಇರಲಿ ಈ ಮಾತು ಇಲ್ಲಿಗೆ
ಕೆಟ್ಟ ನಡತಿ ಹೆಂಗಸರ ಚಾಳಿ
ಹೊಟ್ಟಿನೂವು ಹೊಲಿಕಟ್ಟು ಮುಂಚಿಗೆ
ಮುಟ್ಟಾಗದ ಮಳ್ಳೇರು ಕೇಳಿ
ಸಿಟ್ಟಿಲೆ ಗಂಡಸರು ಬಿಟ್ಟರೆ ಉಡಲಿಕ್ಕೆ
ಬಟ್ಟಿಗಾಣದೆ ತೊಳಲಾಡುವ ಸೂಳಿ
ಮಿಟ್ಟಿಯಂತ ಮಿಂಡ ಮನಿಗೆ ಬಾ ಆಂತಾಳ
ಕಟ್ಟಳಿ ಮನದನ್ನ ಹಳಹಳಿ
ಕಟ್ಟಗಡಿಕೆರ ಮಾತಿಗೆ ಮರುಳಾಗಿ ಗೆಳತೇರೆಲ್ಲರೂ ಜೋಡಿ
ಹೊರಟಾರೋ ಬರಬೇಕಂತ ನೋಡಿ
ಪಟಿಪಿತಾಂಬರುಟ್ಟಾರೋ ಗೆಳತೆರೆಲ್ಲರೂ ಜೋಡಿ
ರೊಟ್ಟಿ ಬುತ್ತಿ ಕಟ್ಟ್ಯಾರೋ ಲಗುಮಾಡಿ
ತಟ್ಟಾನೆ ಕೂಡ್ರುವ ಸಿಂಗರದ ಸಸ್ಸರಟ ಗಾಡಿ
ಗಟ್ಟ್ಯಾಗಿ ಹತ್ತುವ ಚಕ್ಕಡಿ
ಸೃಷ್ಟಿಯೊಳಗಿನ ಸ್ತ್ರೀಜನ ಬರತದ
ಅಷ್ಟ ದಿಕ್ಕಿಲಿ ಬ್ಯಾಗ ಬ್ಯಾಗ
ಹುಟ್ಟಬಂಜಿಯರು ಮಕ್ಕಳ ಬೇಡತಾರ ತಮ್ಮ ಮನಸಿನ್ಯಾಗಾ ||೪||

ಅಣ್ಣ ಜ್ಞಾನಿಗಳು ಹೇಳುವೆ ಆ ಹೆಣ
ಮಣ್ಣಿನೊಳಗ್ಹುಗುದರು ಮೂರುದಿನಕ
ಕಣ್ಣಿಟ್ಟಳು ಮಹಾತ್ಮದ ಲಕ್ಷ್ಮಿ
ಸಣ್ಣಹುಡುಗನ ಪುಣ್ಯದ ಘನಕ
ಬಣ್ಣಿಸಿ ಪೇಳುವೆ ಬಹುತರ ಲೋಕದಿ
ಹೆಣಿದ ಸುಳ್ಳಿನ ಸಂಧಾನಕ
ನುಣ್ಣಗೆ ಹದಿನೆಂಟು ಜಾತಿ ಜನಂಗಳು
ಇನ್ನೊದಗುವ ಕರ್ಮದ ರಿಣಕ
ಉಣ್ಣಿ ಹತ್ತಿದ ಎತ್ತು
ಗಿಣ್ಣಿ ರೋಗಾಪತ್ತು ಧನ್ಯನಾಗಿ ನಡಕೊಂಬುದಕ
ಹುಣ್ಣು ಹುಗಳು ಜ್ವರ ವಾಯು ಶೂಲಿ ನರ
ತನ್ನ ಬ್ಯಾನಿ ನೋವಿನ ಗುಣಕ
ಚನ್ನಾಗಿ ನಿನ್ನ ತನು ಮನದಿ ತಿಳಿದು ನೋಡಣ್ಣಾ
ಅನ್ಯಾಯ ಕಲಿಯುಗದವರ್ನಾ
ಸೊನ್ನೀಲಿ ಸುಮ್ಮನಿರು ಸುಗುಣನಾದರೆ ಇನ್ನಾ
ಮುನ್ನಾ ಅರವು ಹಿಡಿದು ನಡಿ ಜಾಣಾ
ಕರ್ನಾಟಕ ದೇಶ ನಡುಮಧ್ಯ ಶಿಶುವಿನಾಳ ಸ್ಥಾನಾ
ನಿರ್ಣೈಸಿ ನಿಜದಿ ಕವಿತವನಾ
ಕುನ್ನಿ ಮನುಜರು ಮಾಡುವ ಕಪಟಕೆ
ಕುಹಕತನದಲಿ ಈಗಾ
ರನ್ನಮಾತು ಇದು ಸಹಜಸಾರ ತಿಳಿ
ನಿನ್ನ್ಮನದೊಳು ಬೇಗಾ
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೊಗಲ ಮಲಿಯನ ಹಾಲು ಕುಡಿದು ದೊಡ್ಡವರಾಗಿ
Next post ಹ್ಯಾಗೆ ಮಾಡಬೇಕ-ಈಕಿ ಸೋಗ ನೋಡಿ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys